April 10, 2012

ಕರಿಬೇವಿನ ಮರದ
ಬೆಳೆದ ಗೆಲ್ಲು ಮುರಿದರೆ
ಸಂದಿ ಸಂದಿಯಲ್ಲೆಲ್ಲ ಟಿಸಿಲೊಡೆದು
ನೀರು ಬಿಸಿಲನ್ನೆಲ್ಲ ಕುಡಿದು
ಮಾಸ ಬದಲಾಗುವಷ್ಟರಲ್ಲಿ
ಚಿಗುರಿಬಿಡುತ್ತದೆ.
ಹೊಸ ಉಡುಗೆ ತೊಟ್ಟು
ನಳನಳಿಸುತ್ತಲೇ ಮತ್ತೆ ಬೆಳೆದುಬಿಡುತ್ತದೆ.

ಮುರಿದಂತೆ ಬೆಳೆವ
ಬೆಳೆದಂತೆ ಮುರಿಸಿಕೊಳ್ಳುವ
ಎಂದೂ ಮುಗಿಯದ ಈ
ಆಟ ನನಗೂ ಸಾಕಾಗಿದೆ.
ಟಿಸಿಲೊಡೆವ ಸಂದಿಗಳಿಗೆಲ್ಲ
ಬೆಂಕಿ ಬಳಿಯಬೇಕಿದೆ,
ಅದಕ್ಕೂ ಮೊದಲು ಬೇರುಗಳನ್ನು
ಕತ್ತರಿಸಿಕೊಳ್ಳಬೇಕಿದೆ!

No comments:

Post a Comment