April 10, 2012

ಕನವರಿಕೆ

ಅವತ್ತೊಂದು ದಿನ ಎಚ್ಚರಾದಾಗ
ನಡೆಯಬಾರದ್ದು ನಡೆದದ್ದು
ಕನಸೋ ವಾಸ್ತವವೋ ಗೊತ್ತಾಗದೆ
ಅಳು,ಸಿಟ್ಟು,ಸಾಂತ್ವನ,ಪಲಾಯನ
ಎಲ್ಲ ಅಸ್ಪಷ್ಟವಾಗಿ
ಹಗಲು ಕಳೆಯದೆ
ರಾತ್ರಿ ಮುಗಿಯದೆ
ಹುಚ್ಚು ಹಿಡಿದ ಬಗ್ಗೆ
ಅನುಮಾನ ಮೂಡಿ
ರಾಮಾನುಜನ್ ಕವನ ಮಾತ್ರ
ನೆನಪಿನಲ್ಲುಳಿದು ತಲೆ ತಿರುಗಿ
ಮೈ ಜ್ವರ ಬಿಡುವಾಗ
ಬೆವೆತಂತೆ ಬೆವೆತಾಗ
ಹುಚ್ಚು ಬಿಟ್ಟಂತಾಗಿ
ವಿಚಿತ್ರ ಧೈರ್ಯ ಬಂದು
ಕನಸಿನೊಳಗೆ ಮತ್ತೊಂದು
ಕನಸು ಯಾಕಿರಬಾರದು
ಅನ್ನಿಸಿ ಎಚ್ಚರಾಗಲು
ಕಾಯುತ್ತ ಕುಳಿತಿದ್ದೇನೆ
ಅಂದರೆ
ಇನ್ನೂ ಮಲಗಿದ್ದೇನೆ!!!

No comments:

Post a Comment