April 19, 2014

ನೀವು
ಬಾಗಿಸಿದಾಗಲೇ ಗೊತ್ತಾಗಿದ್ದು
ನಾನು ಅಷ್ಟೆಲ್ಲಾ
ಬಾಗಬಲ್ಲೆನೆಂದು.
ಕೇಳಿ,
ನನಗೆ ಸಾವಿನ ಬಗ್ಗೆಯೂ
ಕುತೂಹಲವಿದೆ!

April 16, 2014

ಹಿಂದೆ ತಿರುಗಿದ ಕೃಷ್ಣ
ಹೊರಗೆ ಬರಲಿಲ್ಲ,
ಕನಕನ ಕಂಡು
ಬಾಗಿಲು ಮುಚ್ಚಿತ್ತು!
'ನೂರು ದೇವರನೆಲ್ಲಾ ನೂಕಾಚೆ ದೂರ...'
'ಕುಲ ಕುಲ ಕುಲವೆಂದು ಹೊದೆದಾದದಿರಿ...'
'...ಸರ್ವ ಜನಾಂಗದ ಶಾಂತಿಯ ತೋಟ...'
. . . 
ರಾಗವಾಗಿ ಹಾಡೋಕೆ ಎಲ್ಲ ಹಾಡುಗಳೂ ಇಂಪಾಗಿಯೇ ಇರುತ್ತವೆ;ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ,ಅಂಬೇಡ್ಕರ್ ಜಯಂತಿ,ಗಾಂಧಿ ಜಯಂತಿಯ ಭಾಷಣಗಳೂ ಸ್ಪೂರ್ತಿದಾಯಕವಗಿರುತ್ತವೆ;ಇನ್ನು ನಮ್ಮ ಜಗದ್ಗುರುಗಳ,ಧರ್ಮ ಸಂಸ್ಥಾಪಕರ,ದೇಶವನ್ನು ಜಾಗೃತವಾಗಿಡುವವರ ಪ್ರವಚನಗಳಂತೂ ಪ್ರಶ್ನೆಗಳಿಗೆ ನಿಲುಕದ್ದು!
ಹೀಗೆ ಎಲ್ಲ ಇಂಪಾಗಿ,ಧನಾತ್ಮಕವಾಗಿ,ಆರೋಗ್ಯಕರವಾಗಿಯೇ ಇದೆ,ವಾಸ್ತವವೊಂದನ್ನು ಹೊರತುಪಡಿಸಿ!

ನಮ್ಮನೆ ತೋಟದಲ್ಲಿ ನಮಗಿಂತ ಹೆಚ್ಚು ಕಾಲ ಕಳೆಯೋ ಗಿಡ್ಡನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತಾಡುವಂತಿಲ್ಲ,ಮನೆಯೊಳಗೆ ಊಟ ಬಡಿಸುವಂತಿಲ್ಲ,ಅವನ ಮನೆಯೊಳಗೆ ಹೋಗುವಂತಿಲ್ಲ...ಎಲ್ಲಕ್ಕಿಂತ ಮುಖ್ಯವಾಗಿ ಇಂಥದ್ದನ್ನೆಲ್ಲ ಪ್ರಶ್ನಿಸುವಂತಿಲ್ಲ,ಈ ರೀತಿ ಯೋಚಿಸುವಂತಿಲ್ಲ...ಬರೀ ನಿಶೇಧಗಳೇ!

ಭಾರತದ ಭಾವೀ ಸರ್ಕಾರವೆಂದೇ ಕರೆಯಲ್ಪಡುವ ಮೋದಿ ಸರ್ಕಾರದ ಪರಮೋಚ್ಚ ಗುರಿಗಳಲ್ಲೊಂದು ದೇವಸ್ಥಾನ ಕಟ್ಟುವುದು! ಎಂಥ ದೇವಸ್ಥಾನ? ಕೆಲವರು ಮಾತ್ರ ಪ್ರವೇಶಿಸಬಹುದಾದ,ಕೂತು ಊಟ ಮಾಡಬಹುದಾದ ದೇವಸ್ಥಾನ! ಚಪ್ಪಲಿಯಿಂದ ಕೂದಲಿಗೆ ಹಚ್ಚೋ ಬಣ್ಣದವರೆಗೆ ಆಧುನಿಕರಾಗಿರೋ ನಮಗೆ ದೇವಸ್ಥಾನಗಳು ಮಾತ್ರ ಆಧುನಿಕವಾಗಿರಬಾರದು. 'ಪುರುಷರಿಗೆ' 'ಸ್ತ್ರೀಯರಿಗೆ' ಎಂದು ಶೌಚಾಲಯಗಳ ಹೊರಗೆ ಬೋರ್ಡು ಹಾಕಿದಂತೆ 'ಇಂಥ ಜಾತಿಯವರಿಗೆ' ಎಂದು ದೇವಸ್ಥಾನಗಳ ಹೊರಗೆ ಬರೆಯೋದೊಂದು ಬಾಕಿಯಿದೆ!

ಧರ್ಮ,ಜಾತಿ,ಬಣ್ಣ,ಲಿಂಗ....ಅಸಮಾನತೆ ನಮಗೆ ಹೊಸತಲ್ಲ,ಆದರೆ ಇನ್ನೂ ಹಳತಾಗಿಲ್ಲ...'ತಿಳಿದವರ' ತಿಳಿಗೇಡಿತನ ಖಂಡಿತ ದುರಂತವಲ್ಲ,ಅದಕ್ಕಿಂತಲೂ ಅಪಾಯಕಾರಿಯಾದದ್ದು....

April 15, 2014

ಅಪಾಯ
ಅಭಿವೃದ್ಧಿ
ಎರಡರಲ್ಲೂ ಉರಿಯುತ್ತದೆ
ಕೆಂಪುದೀಪ!

*************

ಮೊಬೈಲ್ ಟವರಿನಡಿ
ಮೊಳೆತ ಬೀಜದ್ದೂ
ಒಂದು
ಬದುಕಂತೆ!
ಕಿಸೆಯಲ್ಲೇ ಇರುತ್ತದೆ
ಶೂನ್ಯ,
ಯಾವಾಗೆಂದರೆ ಆವಾಗ
ಕವಿತೆಯಾಗೋಕೆ
ಹೀಗೆ...!
ಜೀವನದ ಅತಿ ದೊಡ್ಡ 
ಅನರ್ಥ
ಶಿಕ್ಷಣ!!!
ಮೈಕಲ್ಲಿ ಜೋರು
ಪ್ರಚಾರ ನಡೀವಾಗ
ಬಿಳೀ ನಾಯಿಗೆ ಜೋರು
ನಿದ್ದೆ,
ನನಗೆ
ಅಸೂಯೆ!!!

**************

ನಮ್ಮ ಮಧ್ಯೆಯೇ ಅಮೂರ್ತವಾಗಿದ್ದ
ಅಸಮಾನತೆಗೆ,ವಿಕೃತಿಗೆ
ಅಜಾಗರೂಕತೆಗೆ
ಅಧಿಕಾರಶಾಹಿಗೆ
ಕೊಳಕು ನಾಗರಿಕತೆಗೆ
ಮೂರ್ತ ರೂಪ ಕೊಟ್ಟ
'ಮೋದಿ'
ಎಂಬ ಮನಸ್ಥಿತಿಗೆ
ಧನ್ಯವಾದ ಮತ್ತು ಧಿಕ್ಕಾರ...
ಎಲ್ಲವೂ ಆಗಬಲ್ಲ
ಅನ್ನದೆದುರು
ಅನ್ನವಾಗಲಾರದ ಅಕ್ಷರ
ಕುಬ್ಜವಾಗಿ ಕಾಣುತ್ತದೆ...
ನನ್ನೊಡನೆ
ಕವಿತೆಯ ದಿಕ್ಕನ್ನೂ
ಬದಲಾಯಿಸಬಲ್ಲ ಕಣ್ಣುಗಳಲ್ಲಿ 
ನಿಜಕ್ಕೂ ಏನೂ ಇಲ್ಲ
ಆದರೂ....!

April 8, 2014

ಇದೆ ಇದೆ ಇದೆ 
ಎಂದು ಹತ್ತಿ
ಕಂಡ ಬೋಳು ಗುಡ್ಡೆಯಲ್ಲಿ 
ಸುಡೋಕೆ ಬೆಂಕಿಯಿಲ್ಲ 
ಅಗೆಯೋಕೆ ಮಣ್ಣಿಲ್ಲ,
ಕನಿಷ್ಟ ಒಂದು
ಹದ್ದಾದರೂ ಹಾರಬಾರದೆ?!!!
ತನ್ನನ್ನು ತಾನೇ
ಕಾಪಿ ಮಾಡುವ
ಖಾಲಿ ದಿನಗಳಿಗೆ
ಸ್ವಾಭಿಮಾನವಿಲ್ಲ!

******************

ಅದೇ ಹಾದಿಯ
ಅದೇ ತಿರುವಲ್ಲಿ
ಅದೇ ಕವಿತೆ...
ಮತ್ತೆ?
ಮತ್ತದೇ 
ಕವಿತೆ!

April 5, 2014

Birth
Is negligible,
But not
Growth!
ಹುಟ್ಟಿ
ಬೆಳೆದು
ಸಾಯೋದು ಕೂಡ
ಕೃತಕವಾಗಿದ್ದು
ಅರಿವಿಗೆ ಬಾರದ
ದುರಂತ!

**********

ಗಾಳಿ,ನೀರು,ಬೆಳಕು
ಚಲಿಸುವಾಗ
ನನ್ನ ನಿಶ್ಚಲತೆಯ
ಅರ್ಥ ತಿಳಿಯಿಲಿಲ್ಲ.
ಅಪಾಯಕಾರಿ ಧರ್ಮಕ್ಕಿಂತ
ನಿರುಪದ್ರವಿ ನಾಸ್ತಿಕತೆ
ಶ್ರೇಷ್ಠ!