May 3, 2012

ಗಾಜು
ಒಡೆದರೆ ಚೂರು
ದೀಪ
ಆರಿದರೆ ಕತ್ತಲು
ಮಾತು
ಮುಗಿದರೆ ಮೌನ
ಉಸಿರು
ನಿಂತರೆ ಸಾವು.
       ನಿಶ್ಚಿತ ಸತ್ಯಗಳ
       ತೆರೆಯ ಹಿಂದಿನ ಚೌಕಿಮನೆಯಲ್ಲಿ
       ಬಣ್ಣದ ವೇಷಗಳ ಸಾಲು
       ರಾಜ,ರಾಣಿ,ರಾಕ್ಷಸ...

No comments:

Post a Comment