February 16, 2014

ಹಳಿಯಾಳದಿಂದ...

ಮರಳು ತಂಬುಳಿ ಲಿಟರೇಚರ್ ಬಿಟ್ಟು
ಕೊನೇ ಕಿಟಕಿ ಸೀಟಲ್ಲಿ
ಸಿಗ್ನಲ್ಲಿಲ್ಲದೆ ಘಟ್ಟ ಹತ್ತಿ
ಹಾರಿ ಜಾರಿ ನಡುಕ ಮೀರಿ
ನಾಕು ರುಪಾಯಿಯ ಹದಿನಾಕು ಪುಟದಲ್ಲಿ
ಬುದ್ಧಿ ಬೆಂಕಿ ಬೂದಿ ಮಾಡಿ
ಮಣ್ಣು ತಿಂದು
ಕ್ರಿಮಿನಾಶಕ ಕುಡಿದು
ಅಗೆದಗೆದು ಪುಚುಕ್ಕನೆ ಉಗುಳಿ
ಕಥೆ ಕೇಳದೆ ಸಗಣಿ ತೆಗೆದು
ನಂಜೇರದಂತೆ ಕುಂಡೆ ತೊಳೆದು
ಗೊಬ್ಬರ ಸಬ್ಸಿಡಿ ಇಂಕು ತಲೆಗೊರೆಸಿ
ಅಕ್ಷರವೆಲ್ಲ ಫಲವತ್ತಾಗಿ
ಅಮ್ಮ ತೊಳೆದು ಹಾಸಿಟ್ಟ
ಬಣ್ಣದ ಹಸೆ ಮೇಲೆ
ಆಕಳಿಕೆಯೇ ಬರಲಿಲ್ಲ,
ಅಸಂಭವಾಮಿ ಸಿಟಿ ಯುಗೇ
ಪಗಾರಾಗಲಿ ಡ್ರೈವರನಿಗೆ!!!

No comments:

Post a Comment