November 30, 2013

ಬೆಂಕಿಯಿಂದ ಬೆಂಕಿಗೆ
ಬದುಕು,
ಮಧ್ಯೆ ಮಾತ್ರ
ಬರೀ ಹಬೆ!

November 29, 2013


ಸಂಪಾದಕರು
ವಿಮರ್ಶಕರು
ಅದೆಷ್ಟೇ ಆಧುನಿಕರಾದರೂ
ಕಡೆಗೆ ಹುಡುಕುವುದು
ಒಳ್ಳೆಯ ಕವಿತೆಯನ್ನೇ!!!


**************

ಬಿಳಿ ಬಿಳಿ ಹಾಲಲ್ಲೂ
ಹಾಳಾಗಬಲ್ಲ
ಅನೈತಿಕತೆ!!!



**************

ಪೂರ್ತಿಯಾಗು ಅಂದರೆ
ನಿಂತಲ್ಲೇ ಅಂತ್ಯ
ಉದ್ಧಟ ಕವಿತೆಗೆ!


**************

ಪಡೆದು ತೀರಿದ ಸುಖ
ಬರೆದು ಮುಗಿಸಿದ ಕವಿತೆ
ವ್ಯರ್ಥ!



November 27, 2013

ದೇಶ ಬೆಳಗುತ್ತಿದೆ!
ಉರಿಯಲು ಹಗೆಯಿದೆ
ಉರಿಸಲು ಮೌಢ್ಯವಿದೆ
ಹಗುರಾಗಿ ಹಾರಲು
ಅಗಾಧ ಹಸಿವಿದೆ...
ಬೆಂಕಿ
ಅಭಿವೃದ್ಧಿಯ ವಿಳಾಸವಂತೆ!

November 25, 2013

ಹಿಂದುವೆಂದು
ಗರ್ವದಿಂದ ಘರ್ಜಿಸುವಾತ
ತಾನೊಬ್ಬ ಮನುಷ್ಯನೆಂದು
ಕನಸಿನಲ್ಲಿಯೂ ಪಿಸುಗುಟ್ಟಲಾರ!!!

November 24, 2013

ಹಳ್ಳಿ ಹಂಚಿನ ಮನೆಯಲ್ಲಿ
ತೋಟದ ಕೆಲಸ ಮುಗಿಸಿ
ತಲೆದಿಂಬಿಗೊರಗಿದ ಅಪ್ಪ
ಮಗನಲ್ಲಿ ಕಾಣುವ ಪ್ರತೀ ಕನಸಲ್ಲಿ
ರೈತನೊಬ್ಬನ ಕೊಲೆ!
ಎಚ್ಚರಾದದ್ದು ವೃದ್ಧಾಶ್ರಮದ
ಬೃಹತ್ ಕಿಟಕಿಯ ಬಿಸಿಲಿಗೆ!!!

November 23, 2013

ಇಲ್ಲಿ
ಎಲ್ಲ ಥರದವರೂ ಇದ್ದಾರೆ.
ಹವಿಸ್ಸು ತಿಂದು ಕೊಬ್ಬಿರುವ ದೇವರು
ಮತ್ತು
ಕಸ ತಿಂದು ಕೊಬ್ಬಿರುವ ಹಂದಿ;
ಬಿಳಿ ಧೋತ್ರ ಕೊಳಕಾಗಿಸಿಕೊಂಡ ವೈದಿಕರು
ಮತ್ತು
ಕೆಸರು ಗದ್ದೆಯಲಿ ಚಂದವಾಗಿರುವ ರೈತರು!!!

ಮೆಚ್ಚಿದ ಪುಸ್ತಕ

ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಓದುತ್ತಿದ್ದೇನೆ. ಮೇಲ್ವರ್‍ಗದ,ಮೇಲ್ಜಾತಿಯ ಬಹುತೇಕ ಮಂದಿ ಕಾಣದ ಮತ್ತು ಕಾಣಬಯಸದ ಜಗತ್ತನ್ನು ತೆರೆದಿಡುವ ಪುಸ್ತಕ ಇದು..ಇಲ್ಲಿ ಆಳುವವರ ಬಗ್ಗೆ ಆಕ್ರೋಶವಿದೆ,ಆದರೆ ಅದು ಸಿದ್ಧಲಿಂಗಯ್ಯನವರ ಕವನಗಳಲ್ಲಿರುವಂತೆ ಕೊಚ್ಚು,ಮುರಿ ಅನ್ನುವಂಥದ್ದಲ್ಲ..ಬದಲಿಗೆ ಸಮಾನತೆಯ ಕನಸನ್ನು ಪ್ರತೀ ಕ್ಷಣವೂ ಕಾಣುವಂಥದ್ದು.. ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಕೀಳು ಮನಸ್ಸಿನಿಂದ ಇನ್ನಾದರೂ ಹೊರಬರೋಣ ಎನ್ನುವಂಥದ್ದು...ಧರ್ಮದ ನೆಲಗಟ್ಟಿನ ಮೇಲೆ ದೇಶ ಕಟ್ಟಲು ಹೊರಟಿರುವ ಕುರುಡರ ಸಂತೆಯ ಮಧ್ಯೆ ಈ ಕಾರಣಕ್ಕಾಗಿಯೇ ದೇವನೂರು ಅತ್ಯಗತ್ಯವೆನಿಸುತ್ತಾರೆ...

November 21, 2013

ಪ್ರತಿಷ್ಥೆ,ಇಸಮ್ಮು
ವಾದ ವಿವಾದಗಳೆಲ್ಲ
ಬರೆದವರಿಗೆ;
ಈ ಪುಸ್ತಕಗಳು
ಕೊಂಡವರ ಜತೆ
ಆರಾಮಾಗಿ ಇದ್ದುಬಿಡುತ್ತವೆ!!!

*****************

ನೀರಂತೆ
ಕಾವ್ಯ
ಕುಡಿಯಲೇಬೇಕು!

*****************

ಕರಾವಳಿಯ
ಮಳೆ,ಬಿಸಿಲು
ಬಂದರೆ ಸಾಕೆಂದರೂ
ಮುಗಿಯುವುದಿಲ್ಲ
ಕಾವ್ಯದಂತೆ!