June 5, 2013

ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ 'ಸುನೇರಿ'ಯನ್ನು ಮತ್ತೆ ಓದುತ್ತಿದ್ದೇನೆ. ತುಂಬಾ ಇಷ್ಟವಾದದ್ದು ಲೇಖಕಿಯ ironic language. ಉದಾಹರಣೆಗೆ,

' ಈ ಭೂಮಿ_
ಒಂದು ಸುಂದರ ಪುಸ್ತಕ.
ಸೂರ್ಯ ಚಂದ್ರರೇ ಅದರ ರಕ್ಷಾಪತ್ರ.

ಆದರೆ_
ಹಸಿವು
ಬಡತನ
ದಾಸ್ಯ...

ದೇವರೇ,
ಇದೇನು ನಿನ್ನ ಪ್ರವಚನಗಳೆ?
ಅಥವಾ
ಬರಿಯ ಅಚ್ಚಿನ ತಪ್ಪುಗಳೆ? '

ಸುಮ್ಮನೆ ಕೂತಾಗ ಓದಿ ಅನುಭವಿಸಬಹುದಾದ ಇಂಥ ಹಲವು ಕವನಗಳು 'ಸುನೇರಿ'ಯಲ್ಲಿವೆ. ಮಡಿವಂತಿಕೆಯಿಂದ ದೂರದಲ್ಲಿಯೇ ಉಳಿಯುವ ಅಮೃತಾ ಪ್ರೀತಮ್ ಓದುಗರಿಗೆ ಆಪ್ತವಾಗುತ್ತಾರೆ. ಭಾರತದ ಮಟ್ಟಿಗೆ ಹೀಗೆ ಬದುಕಿದಂತೆಯೇ ಬರೆದ ಲೇಖಕಿಯರು ತುಂಬಾ ವಿರಳ....

No comments:

Post a Comment